ಪೂರ್ಣಚಂದ್ರ ತೇಜಸ್ವಿ ಎಂಬ ಕಥೆಗಾರ


ಪೂಚಂತೇಯವರ ಮೊದಲ ಪುಸ್ತಕ ನಾನು ಓದಿದ್ದು “ಕರ್ವಲೋ”. ಆಗ ನಾನಿನ್ನೂ ಚಿಕ್ಕ ಹುಡುಗ, ಐದ್ನೇ ಕ್ಲಾಸಲ್ಲಿದ್ದೆ. ಹೈಸ್ಕೂಲಿನಲ್ಲಿದ್ದ ಅಣ್ಣನಿಗೆ ಸಾಹಿತ್ಯಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ರು ( ತಟ್ಟೆ ಪ್ಲೇಟು ಬಹುಮಾನವಾಗಿ ಕೊಡೋ ಪದ್ದತಿ ಆ ಸ್ಕೂಲಿನಲ್ಲಿರಲಿಲ್ಲ). ನನಗೆ ಅದು ದೆವ್ವ ಭೂತಗಳ ಕಥೆಗಳನ್ನು ಒದೋ ಕಾಲ ( ಅರೇಬಿಯನ್ ನೈಟ್ಸ್, ವಿಕ್ತ್ರಮ ಬೆತಾಳನ ಕಥೆಗಳು ). “ಕರ್ವಲೊ” ಕೇಳೊಕೆ ಹೆಸರು ವಿಚಿತ್ರವಾಗಿತ್ತು , ಕೇಳಿದ್ರೆ ” ಕರ್ವಲೊ ಅಂತ ಒಬ್ಬ ವಿಜ್ನಾನಿ , ಅವರೂ ಮತ್ತೆ ಕೆಲವರೂ ಹಾರೋ ಉಡದ ಹಿಂದೆ ಹೋಗೊ ಕಥೆ”.

ಹಾಗೊ ಹೀಗೊ ಮುಗಿಸಿದೆ … ಹೀರೋ ಭೂತದ ಜೊತೆಗೆ ಫೈಟಿಂಗ್ ಮಾಡ್ಲಿಲ್ಲ ಅಂತ ಸೊಲ್ಪ ಬೇಜರಾಯ್ತು. ಕ್ಲಾಸಿಕ್ ಪುಸ್ತಕಗಳೇನೆಂದರೆ ಐಡಿಯಾನೇ ಇರ್ಲಿಲ್ಲ. ಶಾಲೆಯ ಗಣಿತ ಪುಸ್ತಕಕ್ಕಿಂತಲೂ ದಪ್ಪದ ಪುಸ್ತಕ ಓದಿಬಿಟ್ಟೆ ಎಂಬ ಹೆಮ್ಮೆ ಅಶ್ಟೇ. ಅರ್ಥ ಮಾಡಿಕೊಳ್ಳಿ “ಸುರಂಗದಲ್ಲಿ ಸಮಾಧಿ” ಓದೋ ಕಾಲ ಅದು. ಕತ್ತೆಗೇನು ಗೊತ್ತು ಕಸ್ತೋರಿ ಗಂಧ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಏಳೆಂಟು ಸಲ ಓದಿ ಜಸ್ಟಿಸ್ ಕೊಟ್ಟೆ ಪುಸ್ತಕಕ್ಕೆ.

ಮುಂದಿನ ವರ್ಷ ಅಣ್ಣ “ಶಿವನಿಪಳ್ಳಿಯ ಕಪ್ಪು ಚಿರತೆ” ತಂದ, ಬಹುಮಾನವಾಗಿ. “ಕೆನ್ನೆತ್ ಆಂಡರ್ಸನ್” ಸ್ವತಂತ್ರ್ಯಪೂರ್ವ ಬೆಂಗಳೂರಿನಲ್ಲಿ ಬೇಟೆಯಾಡಿದ ನರಭಕ್ಷಕ ಚಿರತೆ ಹುಲಿಗಳ ಕಥೆಗಳು. ನನ್ನ್ನ ಪೋಚಂತೇ ಅನುವಾದ. ಪುಟಪುಟವೂ ರೊಮಾಂಚಕವಾಗಿತ್ತು. ಆಂಡರ್ಸನ್ ಯಾರೋ ಕೇಳಿ ಗೊತ್ತಿಲ್ಲ , ತೇಜಸ್ವಿಯಂತೂ ಒಂದುವರ್ಷದಿಂದ ಪರಿಚಯ. ಸೊ.. ಇನ್ನೂ “ಶಿವನಿಪಳ್ಲಿ..” ಬೇಟೆಯಾಟ ನೋಡಿದ್ರೆ ತೇಜಸ್ವಿ ಬೇಟೆಗಳೇ ನೆನಪಾಗುತ್ತೆ.

ಮಧ್ಯದಲೊಮ್ಮೆ ನಮ್ಮ ಹಳ್ಳಿ ಪೊಲೀಸ್ ಮಾಮನಲ್ಲಿ ಕಾಡಿ ಬೇಡಿ ಅವರ ಕಲೆಕ್ಶನ್ನಿಂದ ‘ಮಿಸ್ಸಿಂಗ್ ಲಿಂಕ್” ಓದಿದ್ದೆ. “ನಿಯಾಂಡರ್ತಲ್ , ಕ್ರೊ – ಮ್ಯಾಗ್ನನ್” ಮನುಷ್ಯರ ಬಗ್ಗೆ ಬರೆದಿದ್ದ್ರು ತೇಜಸ್ವಿ. Continue reading “ಪೂರ್ಣಚಂದ್ರ ತೇಜಸ್ವಿ ಎಂಬ ಕಥೆಗಾರ”